13 September Current Affairs

Current Affairs with Multiple Choice Quiz Questions (MCQs) on Daily Current events for preparation of PC, SDA, FDA, Group C, PDO, and State PSC Examinations. 

ಪ್ರಚಲಿತ ಘಟನೆಗಳು | Important Facts

 ಭಾರತ–ಸೌದಿ ಅರೇಬಿಯಾ ತೈಲ ಸಂಸ್ಕರಣೆ ಯೋಜನೆ:
• ಪ್ರದೇಶ : ಭಾರತದ ಪಶ್ಚಿಮ ಕರಾವಳಿ
MoU: ಭಾರತ ಮತ್ತು ಸೌದಿ ಅರೇಬಿಯಾ
• ಯೋಜನಾ ಮೊತ್ತ : 50 ಬಿಲಿಯನ್‌ ಅಮೆರಿಕನ್‌ ಡಾಲರ್‌ (4.15 ಲಕ್ಷ ಕೋಟಿ)
• ಸಹಯೋಗ : ಸೌದಿ ಅರೇಬಿಯಾ ಸಾರ್ವಜನಿಕ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಕಂಪನಿ (ಎಆರ್‌ಎಎಂಸಿಒ), ಅಬುದಾಭಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್ಒಸಿ) ಹಾಗೂ ಭಾರತದ ತೈಲ ಕಂಪನಿಗಳು.
• ಭಾರತ–ಸೌದಿ ಅರೇಬಿಯಾ ಕಾರ್ಯ ತಂತ್ರ ಪಾಲುದಾರಿಕೆ ಮಂಡಳಿ ಸಭೆಯ ನಿರ್ಣಯಗಳು :
> ಪ್ರಥಮ ಸಭೆ : ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್‌ ಸೌದ್ ನಡುವೆ ಜರುಗಿತು.
> ಎಂಟು ಒಪ್ಪಂದಗಳು : ಉಭಯ ದೇಶಗಳ ನಡುವೆ ನವೀಕರಿಸಬಹುದಾದ ಇಂಧನ, ವಿದ್ಯುತ್‌ ಸಂಪರ್ಕ ಜಾಲ ಸ್ಥಾಪನೆ, ಸಮುದ್ರದ ನೀರು ಶುದ್ಧೀಕರಿಸುವ ಘಟಕ ಸ್ಥಾಪನೆ, ರಕ್ಷಣೆ, ಶಿಕ್ಷಣ, ಡಿಜಿಟಲೀಕರಣ,ತಂತ್ರಜ್ಞಾನ, ಸಾರಿಗೆ, ಆರೋಗ್ಯ, ಪ್ರವಾಸ ಮತ್ತು ಸಂಸ್ಕೃತಿಕ
> ಸಹಕಾರ : ನೈಸರ್ಗಿಕ ಅನಿಲ, ಆಪ್ಟಿಕಲ್ ಹಾಗೂ ಫೈಬರ್‌ ಜಾಲ ಸ್ಥಾಪನೆ .

ಶುಚಿ ನನ್ನ ಮೈತ್ರಿ ಯೋಜನೆ:
• ಉದ್ದೇಶ : ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಕಲಿಯುತ್ತಿರುವ 17 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಮುಟ್ಟಿನ ಕಪ್‌ಗಳನ್ನು ವಿತರಿಸುವುದು.
• ಚಾಲನೆ : ಸಚಿವ ದಿನೇಶ್‌ ಗುಂಡೂರಾವ್‌, ಕರ್ನಾಟಕ ರಾಜ್ಯ ಸರಕಾರ
• ಉದ್ಘಾಟನೆ : ಮಂಗಳೂರು
• ಪ್ರಾಯೋಗಿಕ ಆರಂಭ : ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ
• ಯೋಜನೆಯ ರಾಯಭಾರಿ : ಚಿತ್ರನಟಿ ಸಪ್ತಮಿ ಗೌಡ

ಡೇನಿಯಲ್‌ ಚಂಡಮಾರುತ :
• ಉತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ಅಬ್ಬರಿಸಿದ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾದ ಪ್ರಧಾನಿ ಒಸಾಮಾ ಹಮದ್‌ ಹೇಳಿದ್ದಾರೆ.

ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿ – 2022 :
• ನೀಡುವವರು : ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ(ಸಿಎಸ್‌ಐಆರ್‌)
• ಪ್ರಶಸ್ತಿ ಮೊತ್ತ : ಐದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ.
• ಪ್ರಶಸ್ತಿ ಘೋಷಣೆ : ಸಿಎಸ್‌ಐಆರ್ ಸಂಸ್ಥಾಪನಾ ದಿನವಾದ ಸೆ. 26ರಂದು ಸಾಮಾನ್ಯವಾಗಿ ಭಟ್ನಾಗರ್ ಪ್ರಶಸ್ತಿಗಳನ್ನು ಘೋಷಿಸ ಲಾಗುತ್ತದೆ.
• 2022ನೇ ಸಾಲಿನ ವಿಜೇತರು : ಒಟ್ಟು 12 ಮಂದಿ.
1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಪೂರ್ವ ಖರೆ (ಗಣಿತ ವಿಜ್ಞಾನ),
2. ಅನಿಂದ್ಯ ದಾಸ್ (ಭೌತ ವಿಜ್ಞಾನ),
3. ಎ.ಟಿ. ಬಿಜು (ರಾಸಾಯನಿಕ ವಿಜ್ಞಾನ)
4. ಮೈಕ್ರೋಸಾಫ್ಟ್ ರಿಸರ್ಚ್ ಲ್ಯಾಬ್‌ನ ನೀರಜ್ ಕಾವಲ್
5. ಅಶ್ವನಿ ಕುಮಾರ್, CSIR – ಇನ್ಸ್ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿ, ಚಂಡೀಗಢ(ಜೀವಶಾಸ್ತ್ರ)
6. ಎಂ ಮಡ್ಡಿಕಾ ಸುಬ್ಬಾ ರೆಡ್ಡಿ, ಸೆಂಟರ್ ಫಾರ್ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್, ಹೈದರಾಬಾದ್.
7. ದೇಬಬ್ರತ ಮೈತಿ, ಐಐಟಿ ಬಾಂಬೆ ,ಭೂಮಿ, ವಾತಾವರಣ, ಸಾಗರ ಮತ್ತು ಗ್ರಹಗಳ ವಿಜ್ಞಾನ
8. ವಿಮಲ್ ಮಿಶ್ರಾ, ಐಐಟಿ ಗಾಂಧಿನಗರ ಇಂಜಿನಿಯರಿಂಗ್
9. ದೀಪ್ತಿ ರಂಜನ್ ಸಾಹೂ, ಐಐಟಿ ದೆಹಲಿ,ಇಂಜಿನಿಯರಿಂಗ್
10. ರಜನೀಶ್ ಕುಮಾರ್, ಐಐಟಿ ಮದ್ರಾಸ್,ಇಂಜಿನಿಯರಿಂಗ್
11. ದೀಪ್ಯಮನ್ ಗಂಗೂಲಿ, CSIR ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ
12. ಬಾಸುದೇಬ್ ದಾಸ್‌ಗುಪ್ತ, TIFR ಮುಂಬೈ,ಭೌತಶಾಸ್ತ್ರ
• ನೆನಪಿಡಿ: ಸಿಎಸ್‌ಐಆರ್‌ನ ಮಹಾನಿರ್ದೇಶಕರು : ಎನ್.ಕಲೈಸೆಲ್ವಿ .

ಮಗಲಿರ್ ಉರಿಮೈ ತೊಗೈ ಯೋಜನೆ :
• ಆರಂಭಿಸಿದವರು : ತಮಿಳುನಾಡು ರಾಜ್ಯ ಸರಕಾರ
• ಉದ್ದೇಶ : ಮಹಿಳೆಯರ ಜೀವನದ ಗುಣಮಟ್ಟ ಹೆಚ್ಚಿಸುವುದು.
• ಸಹಾಯಧನದ ಮೊತ್ತ: ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ತಲಾ ₹1 ಸಾವಿರದಂತೆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದು. ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 54ನೇ ಅಧಿವೇಶನ :
• ಅಧಿವೇಶನ ನಡೆದ ಸ್ಥಳ : ಜಿನೀವಾ
• ನೆನಪಿಡಿ : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ : ವೋಲ್ಕರ್ ಟರ್ಕ್
• ಚರ್ಚಿತ ಅಂಶಗಳು :
> ಉತ್ತರ ಭಾರತದಲ್ಲಿ ಮುಸ್ಲಿಮರು ಆಗಾಗ್ಗೆ ದಾಳಿಗಳಿಗೆ ಗುರಿಯಾಗುತ್ತಿರು ತ್ತಾರೆ. ಹರಿಯಾಣ, ಗುರುಗ್ರಾಮ್‌ದಲ್ಲಿ ಅಂತಹದ್ದೇ ದಾಳಿ ನಡೆದಿದೆ.
> ಮಣಿಪುರದಲ್ಲಿ ಇತರ ಸಮುದಾಯಗಳು ಅಭದ್ರತೆ ಎದುರಿಸುತ್ತಿರುವುದು.
> ‘ಅಸಹಿಷ್ಣುತೆ, ದ್ವೇಷ ಭಾಷಣ, ಧಾರ್ಮಿಕ ಮೂಲಭೂತವಾದ ಮತ್ತು ತಾರತಮ್ಯ ಹತ್ತಿಕ್ಕಬೇಕು. ಈ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನ ದ್ವಿಗುಣಗೊಳಿಸುವ ಭಾರತ ಅಗತ್ಯತೆ ಕ್ರಮ ಕೈಗೊಳ್ಳಬೇಕು.

ಸ್ಯಾಫ್‌ 16 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ – 2023 :
• ಚಾಂಪಿಯನ್ ತಂಡ : ಭಾರತ
• ರನ್ನರ್ ಆಫ್: ಬಾಂಗ್ಲಾದೇಶ್
• ಜರುಗಿದ ಸ್ಥಳ : ಚಾಂಗ್ಲಿಮಿತಂಗ್ ಕ್ರೀಡಾಂಗಣ ,ತಿಂಪು, ಭೂತಾನ್
• ಪ್ರಮುಖ ಅಂಶಗಳು :
> ಬಾಂಗ್ಲಾದೇಶ ತಂಡವನ್ನು 2–0 ಗೋಲುಗಳಿಂದ ಮಣಿಸಿದ ಭಾರತ, ಸ್ಯಾಫ್‌ 16 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
> ಚಾಂಗ್ಲಿಮಿತಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಭರತ್ ಲಾಯ್‌ರೆಂಜಮ್ (8ನೇ ನಿ.) ಮತ್ತು ಲೆವಿಸ್ ಝಾಂಗ್‌ಮಿನ್ಲುನ್ (74ನೇ ನಿ.) ಭಾರತ ತಂಡದ ಪರ ಗೋಲು ಗಳಿಸಿದರು.
> ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಆಟವಾಡಿದ್ದ ಭಾರತ ತಂಡದವರು ಸೆಮಿಫೈನಲ್‌ನಲ್ಲಿ 8–0 ಗೋಲುಗಳಿಂದ ಮಾಲ್ಡೀವ್ಸ್‌ ತಂಡವನ್ನು ಸೋಲಿಸಿದ್ದರು.

ಅಮೆರಿಕ ಓಪನ್ ಟೆನ್ನಿಸ್ ಚಾಂಪಿಯನ್ ಪುರುಷರ ಸಿಂಗಲ್ಸ್ ಪ್ರಶಸ್ತಿ – 2023 :
• ಚಾಂಪಿಯನ್ : ನೊವಾಕ್ ಜೊಕೊವಿಕ್, ಸರ್ಬಿಯಾ
• ರನ್ನರ್ ಆಫ್ : ಡೇನಿಯಲ್ ಮೆಡ್ವೆಡೇವ್ , ರಷ್ಯಾ
• ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಸರ್ಬಿಯಾದ 36 ವರ್ಷದ ಆಟಗಾರ 6–3, 7–6 (7–5), 6–3 ರಿಂದ ಮೂರನೇ ಶ್ರೇಯಾಂಕದ ಮೆಡ್ವೆಡೇವ್ ಅವರನ್ನು ಸೋಲಿಸಿದರು.
• ದಾಖಲೆ : ಟೆನಿಸ್‌ನ ಓಪನ್‌ ಯುಗದಲ್ಲಿ (1968ರ ನಂತರ) ಈ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎನ್ನುವ ಹಿರಿಮೆಯೂ ನೊವಾಕ್ ಅವರದಾಯಿತು. ಇದು ಅವರಿಗೆ 24ನೇ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್ ಪ್ರಶಸ್ತಿ. ಈ ಹಿಂದೆ 1970ರಲ್ಲಿ ಆಸ್ಟ್ರೇಲಿಯಾದ ಕೆನ್‌ ರೋಸ್‌ವಾಲ್ 35 ವರ್ಷವಿದ್ದಾಗ ಚಾಂಪಿಯನ್ ಆಗಿದ್ದರು.

ಅಮೆರಿಕ ಓಪನ್‌ ಟೂರ್ನಿ – 2023 : ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್‌ ಜೋಡಿ.
• ಚಾಂಪಿಯನ್‌ ಜೋಡಿ : ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಮತ್ತು ನ್ಯೂಜಿಲೆಂಡ್‌ನ ಎರಿನ್ ರೌಟ್ಲಿಫ್

ಡಚ್ ಪ್ರಧಾನಿ ಕರ್ನಾಟಕ ಭೇಟಿ :
• ಮಾರ್ಕ್‌ ರುಟ್ಟೆ : ಇವರು ನೆದರ್ಲೆಂಡ್ಸ್ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ .
• ಉದ್ದೇಶ : ರಾಜ್ಯದಲ್ಲಿ ಡಚ್ ಕಂಪನಿಗಳ ಹೂಡಿಕೆಗೆ ಉತ್ತೇಜನ ಹಾಗೂ ಈಗಾ ಗಲೇ ಹೂಡಿಕೆ‌ ಮಾಡಿರುವ ಕಂಪನಿಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚಿಸುವುದು.
• ಮಾತುಕತೆ : ರಾಜ್ಯ ಪ್ರವಾಸದಲ್ಲಿರುವ ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್ ರುಟ್ಟೆ ನೇತೃತ್ವದ ಅಧಿಕಾರಿಗಳು ಮತ್ತು ಡಚ್ ಉದ್ಯಮಿಗಳ ನೇತೃತ್ವದ ನಿಯೋಗವು ಈ ಸಭೆಯಲ್ಲಿ ಪಾಲ್ಗೊಂಡು, ತಮ್ಮ ಬೇಡಿಕೆಗಳನ್ನು ಸಭೆಯ ಮುಂದಿಟ್ಟಿತು. ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಗೂ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೂಡಿಕೆಗೆ ಪೂರಕ ವಾದ ಪಾರದರ್ಶಕ ವ್ಯವಸ್ಥೆ ಹಾಗೂ ಅಬಕಾರಿ ನಿಯಮಗಳಲ್ಲಿ ಕೆಲವು ಬದಲಾವಣೆ ತರುವ ಕುರಿತು ಪ್ರಸ್ತಾವನೆಗಳನ್ನು ಮುಂದಿಟ್ಟಿತು.